Slide
Slide
Slide
previous arrow
next arrow

ಗಾಂಜಾ ಪ್ರಕರಣ: ಆರೋಪಿಗೆ ಶಿಕ್ಷೆ ಪ್ರಕಟ

300x250 AD

ಕಾರವಾರ: ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗೆ ಶಿಕ್ಷೆ ಪಕಟಿಸಿದೆ. 7 ಜುಲೈ 2022 ರಂದು ತಾಲ್ಲೂಕಿನ ಶಿರವಾಡ-ಜಾಂಬಾ ರಸ್ತೆಯಲ್ಲಿ ಮಣಿಕಂಠ ರಾಥೋಡ (29) ಎಂಬಾತ 10,000 ಮೌಲ್ಯದ 508 ಗ್ರಾಂ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಪೋಲೀಸರು ದಾಳಿ ಮಾಡಿ ಆತನ ಬಳಿಯಿದ್ದ ಗಾಂಜಾ , ನಗದು ವಶಕ್ಕೆ ಪಡೆದು, ರಾಥೋಡನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹಂತೇಶ ದರ್ಗದ ವಿಚಾರಣೆ ನಡೆಸಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 6ತಿಂಗಳ ಕಾರಾಗೃಹ ವಾಸ, 6,000 ದಂಡ ಪಾವತಿಸುವಂತೆ ಆದೇಶಿಸಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕ ವೆಂಕಟೇಶ ಗೌಡ ಸರ್ಕಾರದ ಪರ ವಾದ ಮಂಡಿಸಿದ್ದರು.

300x250 AD
Share This
300x250 AD
300x250 AD
300x250 AD
Back to top